ಧನಾತ್ಮಕ ಶಕ್ತಿ
ಹೊಲವನ್ನು ಹಾಗೇ ಬಿಟ್ಟರೆ
ಕಳೆ ಬೆಳೆಯುವುದು
ಹೊಲವನ್ನು ಹದಗೊಳಿಸಿ ,ಉತ್ತಿ ,
ಬಿತ್ತಿದರೆ ಬೆಳೆಯು ಬರುವುದು
ಹೊಲದಲ್ಲಿ ಬೆಳೆಯು ಹಚ್ಚ ಹಸಿರಿನಿಂದ
ಕಂಗೊಳಿಸುತ್ತದೆ
ಪ್ರಾಣಿ ಪಕ್ಷಿಗಳನ್ನೂ ಕರೆತರುತ್ತದೆ
ನೋಡುಗರ ಕಣ್ಮನವನ್ನೂ ಸೂರೆಗೊಳ್ಳುತ್ತದೆ
ರೈತರ ವದನವೂ ಅರಳುತ್ತದೆ
ಹೊಟ್ಟೆಯೂ ತಣ್ಣಗಾಗುತ್ತದೆ
ಅದೇ ತೆರದಲ್ಲಿ....
ಮನದಲ್ಲಿ , ಮನಸಿನಲಿ ಪೊಸಿಟಿವ್
ಆಲೋಚನೆಗಳೇ ತುಂಬಿದ್ದರೆ
ನೆಗೆಟಿವ್ ಆಲೋಚನೆಗಳಿಗೆ
ಜಾಗವೇ ಇಲ್ಲಾ....
ಎಲ್ಲವೂ ಪಾಸಿಟಿವ್ ಇರಲಿ...
ಕೆಲವೊಂದು ಟೆಸ್ಟ್ ಗಳು ಮಾತ್ರ
ನೆಗೆಟಿವೇ ಬರಲಿ...
✍️✍️ಭಾಗ್ಯಶ್ರೀ ಕೆಕ್ಕಾರ
೨೨/೦೨/೨೦೨೨