ಚಿರತೆ

 ಮಾನವನ ಸ್ವಾರ್ಥವು ಹೆಚ್ಚಿಹುದು ಜಗದಲ್ಲಿ 
ಕಾಡನ್ನು ಕಡಿದು ನಾಡನ್ನು ಮಾಡಿಹರು
ಕಟ್ಟಿರುವರು ಮಹಲುಗಳ ಕಾಡಿರುವ ಸ್ಥಳದಲ್ಲಿ 
ಅವುಗಳಿಗೇನು ಅರಿವುಂಟು ?! 
ಮರಳುವರು ತಮ್ಮ ವಾಸದ ಸ್ಥಳಕೆ
ಮಾನವನ ಸ್ವಾರ್ಥಕೆ ಕೊನೆಯೆಂಬುದಿಲ್ಲ
ಪ್ರಾಣಿಗಳ ಪಾಡು ಕೇಳುವವರಿಲ್ಲ

✍️✍️ ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೩/೧೨/೨೦೨೨
 

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)