ಬೀಸುವ ಗಾಳಿಗೆ ಬೇಧ ಭಾವವಿಲ್ಲ  
ಸುಗಂಧ ದುರ್ಗಂಧಗಳೆಂದು
ಬೇಧವೆಣಿಸದೆ ಎಲ್ಲವನ್ನೂ 
ಹೊತ್ತೊಯ್ಯುತದೆ ಗಾಳಿಯಲ್ಲಿ

ಗುಡಿಸಲೋ,ಅರಮನೆಯೋ ಎಂಬ ಬೇಧ ಭಾವವಿಲ್ಲ
ಬೆಳಕ ನೀಡುವ ಸೂರ್ಯನಿಗೆ
ಎಲ್ಲೆಡೆಯೂ  ಪಸರಿಸುವನು ⛅ ತನ್ನ ಕಿರಣಗಳನ್ನ

ಬಡವನೊ,ಬಲ್ಲಿದನೊ ಎಂಬ  ಬೇಧ ಭಾವವಿಲ್ಲ
  ಸುರಿವ ವರುಣನಿಗೆ,ಬಂತೆಂದರೆ ಸಾಕು 
ಎಲ್ಲರನ್ನೂ  ತೋಯಿಸುವನು

ಧರಣಿಗೆ ಮೇಲು -ಕೀಳು ,ಬಡಲ -ಬಲ್ಲಿದನೆಂಬ
ಭೇದ ಭಾವವಿಲ್ಲ, ಎಲ್ಲರನ್ನೂ
ಹೊತ್ತು ನಿಂತಿದೆ ತನ್ನ  ಮಡಿಲಿನಲಿ

ಉರಿಯುವ ದೀಪಕ್ಕೆ ಬೇಧಭಾವವಿಲ್ಲ
ಬಡವ,ಬಲ್ಲಿದರೆಂದು,ಸದಾ ಸುರುವಲೇ 
ಬೇಕು ತೈಲವನ್ನ ಮಾತ್ರ

ಒಳ್ಳೆಯವರೊ,ಕೆಟ್ಟವರೊ ಎಂಬ ಬೇಧ ಭಾವವಿಲ್ಲ
ಕಣ್ಣಿಗೆ ಕಾಣಿಸದ ಆ ಭಗವಂತನಿಗೆ,
ಎಲ್ಲರೂ ಒಂದೆ ಅವನ ದೃಷ್ಟಿಯಲ್ಲಿ.
ಮತ್ಯಾಕೆ ನಮಗಿನ್ನು ಒಲ್ಲದ ಚಿಂತೆ
 ನಮ್ಮ ನಾವು ಅರಿತು ಬಾಳಿದರೆ ಸಾಕಲ್ಲವೇ!!??


ಕರಮುಗಿದು ಬೇಡುವೆನು
ನಿನ್ನಯ ಚರಣಗಳಲಿ
ವಿನಾಯಕ ಲಂಬೋದರ 
ಸತತ ಎಮ್ಮನು ಕಾಯೋ//ಪ//

ನಮ್ಮೆಲ್ಲರ  ಬಾಳಿನ ಕಷ್ಟಗಳ ನೀಗಿಸು
ಸದಾ  ಬಾಳಿನಲಿ  ಆನಂದವ  ಪಾಲಿಸು
ಹರಸು ಎಮ್ಮನು ಸತತ ವಿನಾಯಕನೆ//೧//

ದುಃಖ ದುಮ್ಮಾನ ಬಳಿಯಲಿ ಸುಳಿಯದಂತೆ
ದ್ವೇಷ ,ಅಸೂಯೇ ಮನದೊಳಗೆ ಬರದಂತೆ
ಸತತ ಎಮ್ಮನು ಕಾಯೋ  ವಿನಾಯಕನೆ//೨//

ಆಶ-ಪಾಶಗಳ ಹಿಡಿತದಲಿ ಇರಿಸು
ನೇಮ ನಿಷ್ಟೆಗಳ  ಬಾಳಿನಲಿ ನಡೆಸು
ಸದ್ಬುದ್ದಿ ಸೌಭಾಗ್ಯ ಕೊಟ್ಟು ಕಾಪಾಡು
ಸತತ ಎಮ್ಮನು ಕಾಯೋ ವಿನಾಯಕನೆ//೩//

 ಸರ್ವರಿಗೂ ಸದಾ ಒಳಿತನ್ನು  ನೀಡು ಪಾಲಿಸು
ಬಾಳಿನಲಿ ನೆಮ್ಮದಿ ಇತ್ತು ಕಾಪಾಡು
ಸತತ ಎಮ್ಮನು ಕಾಯೋ 
ವಿನಾಯಕನೆ ವಿಘ್ನ ನಿವಾರಕನೆ


ಗಂಧ ಚಂದನ ಹಚ್ಚುವೆನು,ಕೆಂಪು ದಳದ ಪುಷ್ಪಗಳ ಪಾದಗಳಿಗೆ ಏರಿಸುವೆನು, ತುಪ್ಪದ ದೀಪ ಹಚ್ಚಿ -
ಕರ ಮುಗಿದು ಬೇಡುವೆನು,ಎಲ್ಲರನ್ನೂ ವಿಘ್ನಗಳಿಂದ
ದೂರಗೊಳಿಸು ವಿನಾಯಕ.







Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)