ಕವಿ ಸಮಯ
#ಕವಿ ಸಮಯ -೧೭
***************
ವಿಷಯ -ಪಯಣ
ಕವನ
#ಬಾಳ ಪಯಣ
*********************
ಬದುಕಿನ ಪಯಣ ಮೆಲ್ಲನೆ ಸಾಗಲಿ
ಅವಸರವಿರದೆ ಮುಂದಕೆ ನಡೆಯಲಿ
ಹಿಂದಿನ ಪಯಣದ ಅನುಭವವಿರಲಿ
ನಾಳೆಯ ಪಯಣಕೆಂದೂ ಸಜ್ಜಾಗಿರಲಿ
ಪಯಣದ ಹಾದಿಯು ಹೇಗೆ ಇರಲಿ
ಧೈರ್ಯದಲೆ ಎದುರಿಸಿ ನಡೆಯಲಿ
ಕಳೆದ ದಿನಗಳ ಸ್ಮರಣೆಯದು ಪಾಠ
ಮುಂದಿನ ಬಾಳಿಗದು ಬೆಳಕಾಗಿರಲಿ
ನೋವು -ನಲಿವು ಎಲ್ಲವೂ ಇಲ್ಲಿಹುದು
ಜೀವನದಲೆಲ್ಲರ ಜೊತೆಗೂಡಿ ಸಾಗಲು
ನಗು ನಗುತಲೆ ಮುಂದೆ ಸಾಗುತಲಿರಲು
ಬಾಳಿನ ದಾರಿಯು ಸರಳ, ಸುಲಭವು
ಹರಿಯುವ ನೀರಿನಂತೆ ಜೀವನ ಪಯಣ
ಅಡೆತಡೆಗಳ ದಾಟಿ ಮುನ್ನಡೆಯೋಣ !
ಬದುಕಿನ ಸಿಹಿ -ಕಹಿ , ಸಂತಸ -ಸಂಕಷ್ಟವ
ಅನುಭವಿಸಿ ಬಾಳಿನ ಬಂಡಿ ಎಳೆಯೋಣ.
✍🏻ಭಾಗ್ಯಶ್ರೀ ಕೆಕ್ಕಾರ
೧೪/೦೨/೨೦೨೫